Friday, 31 August 2018

ಅನುಕಂಪದ ಮೇರೆಗೆ ನೇಮಕಾತಿ

ಸರ್ಕಾರಿ ಕಾರ್ನರ್​

Saturday, 01.09.2018, 3:02 AM      
ನನ್ನ ಸ್ನೇಹಿತನೊಬ್ಬನು ಸರ್ಕಾರಿ ನೌಕರಿಯಲ್ಲಿದ್ದಾಗಲೇ ನಿಧನಹೊಂದಿದ್ದು, ಸದರಿ ಅವರ ಪತ್ನಿಗೆ ಅನುಕಂಪದ ಮೇರೆಗೆ ಅರ್ಜಿಯನ್ನು ತಾಲೂಕು ಪಂಚಾಯಿತಿ ಮೂಲಕ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಲಾಗಿದೆ. ಆದರೆ 9ನೇ ತರಗತಿ ಓದಿದ ಅವರ ಪತ್ನಿಗೆ ‘ಡಿ’ ದರ್ಜೆ ನೌಕರಿ ನೀಡಲಾಗುವುದಿಲ್ಲ. ಕನಿಷ್ಠ 10ನೇ ತರಗತಿ ಪಾಸಾಗಬೇಕೆಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿದ್ದಾರೆ.
| ಮನೋಹರ್ ಎಂ. ವೇಳಿಪ, ಜೊಯಿಡ, ಉ.ಕ.
ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕ) ನಿಯಮಾವಳಿ ನಿಯಮ 3ರ ಪ್ರಕಾರ ಮೃತ ಸರ್ಕಾರಿ ನೌಕರನ ಪತ್ನಿ ಅಥವಾ ಪುತ್ರ ಅನುಕಂಪದ ಮೇರೆಗೆ ನೇಮಕಾತಿ ಹೊಂದಲು ಅರ್ಹರಾಗಿರುತ್ತಾರೆ. ‘ಡಿ’ ದರ್ಜೆಯ ಹುದ್ದೆಗೆ ಈ ನಿಯಮಾವಳಿಯ ನಿಯಮ 4 (3)ರ ಪ್ರಕಾರ ನಿಗದಿಪಡಿಸಿದರೂ 2017.10.27ರ ಸರ್ಕಾರಿ ಸುತ್ತೋಲೆ ಸಂಖ್ಯೆ ಸಿಆಸುಇ 105, ಸೇಆನೇ 2017ರ ಪ್ರಕಾರ 1996ರ ನಿಯಮಗಳ ನಿಯಮ 4 (3) ಇದ್ದರೂ ಗ್ರೂಪ್ ಡಿ ಹುದ್ದೆಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಪರಿಗಣಿಸುವಲ್ಲಿ ವಿದ್ಯಾರ್ಹತೆಗೆ ವಿನಾಯಿತಿ ನೀಡಲಾಗಿದೆ. ಹೀಗಾಗಿ ಈ ಸುತ್ತೋಲೆ ಅನ್ವಯ ಮತ್ತೊಮ್ಮೆ ಅನುಕಂಪದ ಮೇರೆಗೆ ನೇಮಕಕ್ಕೆ ಜಿಲ್ಲಾ ಪಂಚಾಯಿತಿಗೆ ಪುನರ್ ಮನವಿ ಸಲ್ಲಿಸಬಹುದು. 

No comments:

Post a Comment

ಅನುಕಂಪದ ಆಧಾರದ ಮೇಲೆ

ಸರ್ಕಾರಿ ಕಾರ್ನರ್‌ Friday, 31.08.2018, 3:00 AM       ವಿಜಯವಾಣಿ ಸುದ್ದಿಜಾಲ ದಿನದ ಪ್ರಶ್ನೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ನನ್ನ ತಂದೆ ಸೇವೆ...