Friday, 31 August 2018

ಅನುಕಂಪದ ಆಧಾರದ ಮೇಲೆ

ಸರ್ಕಾರಿ ಕಾರ್ನರ್‌

Friday, 31.08.2018, 3:00 AM     

ದಿನದ ಪ್ರಶ್ನೆ
ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ನನ್ನ ತಂದೆ ಸೇವೆ ಸಲ್ಲಿಸುತ್ತಿರುವಾಗಲೇ ನಿಧನರಾದರು. ಅವರ ನಿಧನದಿಂದ ಅನುಕಂಪದ ಆಧಾರದ ಮೇಲೆ ವಾಹನ ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಏನಿರಬೇಕು? ಹುದ್ದೆ ನೀಡಲು ಕಾಲಾವಧಿಯ ಮಿತಿ ಎಷ್ಟು?
| ವಿನಯ್ ಮಾ. ನಲವಾಡಿ ಧಾರವಾಡ
ಕರ್ನಾಟಕ ಸರ್ಕಾರಿ ಸೇವಾ (ಅನುಕಂಪದ ಮೇರೆಗೆ ನೇಮಕ) ನಿಯಮಾವಳಿ ನಿಯಮ 3ರ ಪ್ರಕಾರ ಮೃತ ಸರ್ಕಾರಿ ನೌಕರನ ಪತ್ನಿ ಅಥವಾ ಪುತ್ರ ಅನುಕಂಪದ ಮೇರೆಗೆ ನೇಮಕಾತಿ ಹೊಂದಲು ಅರ್ಹರು. 1977ರ ಸಾಮಾನ್ಯ ನೇಮಕಾತಿ ನಿಯಮಾವಳಿ ನಿಯಮ 9 (1ಎ) ಮೋಟಾರು ವಾಹನ ಚಾಲಕರ ಹುದ್ದೆಗೆ ಪಿಯುಸಿ ಜತೆ ಉತ್ತಮ ದೇಹದಾರ್ಢ್ಯ ಹೊಂದಿದ್ದು, ಆರ್.ಟಿ.ಓ. ಕಚೇರಿಯಿಂದ ವಾಹನ ಚಾಲನೆಯ ಲೈಸೆನ್ಸ್ ಪಡೆದು ಸಲ್ಲಿಸಬೇಕು. ಈ ನೇಮಕಾತಿ ಪ್ರಕ್ರಿಯೆಯನ್ನು ನಾಲ್ಕು ತಿಂಗಳೊಳಗೆ ಪೂರೈಸಬೇಕು. ಈ ಅನುಕಂಪದ ನೇಮಕಕ್ಕೆ ನೀವು ತಂದೆ ನಿಧನರಾದ ದಿನಾಂಕದಿಂದ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಬೇಕು.

No comments:

Post a Comment

ಅನುಕಂಪದ ಆಧಾರದ ಮೇಲೆ

ಸರ್ಕಾರಿ ಕಾರ್ನರ್‌ Friday, 31.08.2018, 3:00 AM       ವಿಜಯವಾಣಿ ಸುದ್ದಿಜಾಲ ದಿನದ ಪ್ರಶ್ನೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ನನ್ನ ತಂದೆ ಸೇವೆ...