Sunday, 25 February 2018
Saturday, 24 February 2018
ಹೆರಿಗೆ ರಜೆ- ಮೃತಪಟ್ಟ ಮಗುವಿಗೆ ಸಂಬಂಧಿಸಿದಂತೆ
*ಸರ್ಕಾರಿ ಕಾರ್ನರ್*
Monday, 19.02.2018, 3:01 AM ವಿಜಯವಾಣಿ ಸುದ್ದಿಜಾಲ
ದಿನದ ಪ್ರಶ್ನೆ
ಸರ್ಕಾರಿ ನೌಕರಳಾದ ನನಗೆ 32 ವಾರ 3 ದಿನಗಳಿದ್ದಾಗ (8 ತಿಂಗಳು ತುಂಬಿ, 9ನೇ ತಿಂಗಳು ಬಂದಿದೆ) 2018ರ ಜನವರಿ 17ನೇ ತಾರೀಖು, ಸಿಸೇರಿಯನ್ ಮೂಲಕ ಮೃತಪಟ್ಟ ಹೆಣ್ಣುಮಗುವಿಗೆ ಜನ್ಮ ನೀಡಿದೆ. ಹಾಗಾದರೆ ನಾನು 6 ತಿಂಗಳ ಹೆರಿಗೆ ರಜೆಗೆ ಅರ್ಹಳೇ? ಹೆರಿಗೆ ರಜೆಗೆ ಅರ್ಹಳಾಗದಿದ್ದಲ್ಲಿ ನನ್ನ ಆರೈಕೆಗೆ ಎಷ್ಟು ದಿನಗಳ ರಜೆ ಸಿಗುತ್ತದೆ ಹಾಗೂ 6 ತಿಂಗಳ ಹೆರಿಗೆ ರಜೆ ಅನ್ವಯವಾಗುವುದಾದರೆ ಕೆ.ಸಿ.ಎಸ್.ಆರ್.ನ ಯಾವ ನಿಯಮ, ಉಪನಿಯಮ ಅನ್ವಯವಾಗುತ್ತದೆ?
| ವಾಣಿ ಕಗ್ಗಲೀಪುರ, ಬೆಂಗಳೂರು
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರ ಮೇರೆಗೆ 180 ದಿನಗಳ ಕಾಲ ಹೆರಿಗೆ ರಜೆ ಲಭ್ಯವಾಗುತ್ತದೆ. 1961ರ ಪ್ರಸೂತಿ ಸೌಲಭ್ಯ ಅಧಿನಿಯಮದ ಪ್ರಕರಣ 3ಬಿ ರಂತೆ 26 ವಾರಗಳ ನಂತರ ಜನನವಾಗುವ ಮಗುವು ಜೀವಂತವಿರಲಿ ಅಥವಾ ಇಲ್ಲದಿರಲಿ ಅದು ಸಾಮಾನ್ಯ ಹೆರಿಗೆ ಎಂದು ಭಾವಿಸಿ ಅಷ್ಟು ದಿನಗಳ ಕಾಲ ಹೆರಿಗೆ ರಜೆ ಸೌಲಭ್ಯ ನೀಡಬೇಕಾಗುತ್ತದೆ. ಈ ನಿಯಮದಂತೆ ನೀವು 180 ದಿನಗಳ ಕಾಲ ಹೆರಿಗೆ ರಜೆ ಸೌಲಭ್ಯ ಪಡೆದು ತದನಂತರ ಕರ್ತವ್ಯಕ್ಕೆ ಹಾಜರಾಗಬಹುದು.
Monday, 19.02.2018, 3:01 AM ವಿಜಯವಾಣಿ ಸುದ್ದಿಜಾಲ
ದಿನದ ಪ್ರಶ್ನೆ
ಸರ್ಕಾರಿ ನೌಕರಳಾದ ನನಗೆ 32 ವಾರ 3 ದಿನಗಳಿದ್ದಾಗ (8 ತಿಂಗಳು ತುಂಬಿ, 9ನೇ ತಿಂಗಳು ಬಂದಿದೆ) 2018ರ ಜನವರಿ 17ನೇ ತಾರೀಖು, ಸಿಸೇರಿಯನ್ ಮೂಲಕ ಮೃತಪಟ್ಟ ಹೆಣ್ಣುಮಗುವಿಗೆ ಜನ್ಮ ನೀಡಿದೆ. ಹಾಗಾದರೆ ನಾನು 6 ತಿಂಗಳ ಹೆರಿಗೆ ರಜೆಗೆ ಅರ್ಹಳೇ? ಹೆರಿಗೆ ರಜೆಗೆ ಅರ್ಹಳಾಗದಿದ್ದಲ್ಲಿ ನನ್ನ ಆರೈಕೆಗೆ ಎಷ್ಟು ದಿನಗಳ ರಜೆ ಸಿಗುತ್ತದೆ ಹಾಗೂ 6 ತಿಂಗಳ ಹೆರಿಗೆ ರಜೆ ಅನ್ವಯವಾಗುವುದಾದರೆ ಕೆ.ಸಿ.ಎಸ್.ಆರ್.ನ ಯಾವ ನಿಯಮ, ಉಪನಿಯಮ ಅನ್ವಯವಾಗುತ್ತದೆ?
| ವಾಣಿ ಕಗ್ಗಲೀಪುರ, ಬೆಂಗಳೂರು
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 135ರ ಮೇರೆಗೆ 180 ದಿನಗಳ ಕಾಲ ಹೆರಿಗೆ ರಜೆ ಲಭ್ಯವಾಗುತ್ತದೆ. 1961ರ ಪ್ರಸೂತಿ ಸೌಲಭ್ಯ ಅಧಿನಿಯಮದ ಪ್ರಕರಣ 3ಬಿ ರಂತೆ 26 ವಾರಗಳ ನಂತರ ಜನನವಾಗುವ ಮಗುವು ಜೀವಂತವಿರಲಿ ಅಥವಾ ಇಲ್ಲದಿರಲಿ ಅದು ಸಾಮಾನ್ಯ ಹೆರಿಗೆ ಎಂದು ಭಾವಿಸಿ ಅಷ್ಟು ದಿನಗಳ ಕಾಲ ಹೆರಿಗೆ ರಜೆ ಸೌಲಭ್ಯ ನೀಡಬೇಕಾಗುತ್ತದೆ. ಈ ನಿಯಮದಂತೆ ನೀವು 180 ದಿನಗಳ ಕಾಲ ಹೆರಿಗೆ ರಜೆ ಸೌಲಭ್ಯ ಪಡೆದು ತದನಂತರ ಕರ್ತವ್ಯಕ್ಕೆ ಹಾಜರಾಗಬಹುದು.
ವಾರ್ಷಿಕ ವೇತನ ಲೆಕ್ಕಾಚಾರ
https://drive.google.com/file/d/1bAyg3PQ9iA5VIVRnfI9yNILdnUgm-4R8/view?usp=drivesdk
Just INPUT 10 points of your salary and find complete details of your Annual statement with Income Tax form 16..
ಕೇವಲ 10 ಅಂಶಗಳನ್ನು ತುಂಬಿ ವಾರ್ಷಿಕ ವೇತನ ಲೆಕ್ಕಾಚಾರ (ದಿಢೀರ್) ಮಾಡಿ..*
*Just INPUT 10 points of your salary and find complete details of your Annual statement with Income Tax form 16..*
*select Grade(
ನಿಮ್ಮ ಹುದ್ದೆಯ ದರ್ಜೆ)
**Enter Basic pay of January and February(ಜನೇವರಿ ಮತ್ತು ಫೆಬ್ರವರಿ ಮಾಹೆಗಳ ಮೂಲವೇತನ)
3) Select Month number of Annual Increment
And also Time bond(ವಾರ್ಷಿಕ/ಕಾಲಿಕ/ಸ್ಥಗಿತ ವೇತನ ಬಡ್ತಿ ಪಡೆದ ತಿಂಗಳಿನ ಕ್ರಮ ಸಂಖ್ಯೆ)
4) Select surrender taken month.(ಗಳಿಕೆ ರಜೆ ನಗದೀಕರಿಸಿದ ತಿಂಗಳಿನ ಕ್ರಮ ಸಂಖ್ಯೆ)
5) Select your city(ನಿಮ್ಮ ನಗರ ಆಯ್ಕೆ)
6) Select Teacher Category ( Primary, Secondary or PU Lecturer)(ಶಿಕ್ಷಕ ವರ್ಗ)
7) Enter SFN amount(ಕುಟುಂಬ ಕಲ್ಯಾಣ ಭತ್ಯೆ)
8) KGID
9) LIC
10) NPS /GPF
Just INPUT 10 points of your salary and find complete details of your Annual statement with Income Tax form 16..
ಕೇವಲ 10 ಅಂಶಗಳನ್ನು ತುಂಬಿ ವಾರ್ಷಿಕ ವೇತನ ಲೆಕ್ಕಾಚಾರ (ದಿಢೀರ್) ಮಾಡಿ..*
*Just INPUT 10 points of your salary and find complete details of your Annual statement with Income Tax form 16..*
*select Grade(
ನಿಮ್ಮ ಹುದ್ದೆಯ ದರ್ಜೆ)
**Enter Basic pay of January and February(ಜನೇವರಿ ಮತ್ತು ಫೆಬ್ರವರಿ ಮಾಹೆಗಳ ಮೂಲವೇತನ)
3) Select Month number of Annual Increment
And also Time bond(ವಾರ್ಷಿಕ/ಕಾಲಿಕ/ಸ್ಥಗಿತ ವೇತನ ಬಡ್ತಿ ಪಡೆದ ತಿಂಗಳಿನ ಕ್ರಮ ಸಂಖ್ಯೆ)
4) Select surrender taken month.(ಗಳಿಕೆ ರಜೆ ನಗದೀಕರಿಸಿದ ತಿಂಗಳಿನ ಕ್ರಮ ಸಂಖ್ಯೆ)
5) Select your city(ನಿಮ್ಮ ನಗರ ಆಯ್ಕೆ)
6) Select Teacher Category ( Primary, Secondary or PU Lecturer)(ಶಿಕ್ಷಕ ವರ್ಗ)
7) Enter SFN amount(ಕುಟುಂಬ ಕಲ್ಯಾಣ ಭತ್ಯೆ)
8) KGID
9) LIC
10) NPS /GPF
ಸಾಂದರ್ಭಿಕ ರಜೆಯ ಕುರಿತು ಕೆಲವು ಪ್ರಶ್ನೆಗಳು& ಉತ್ತರ
*ಸರ್ಕಾರಿ ಕಾರ್ನರ್*
Tuesday, 13.02.2018, 3:00 AM ವಿಜಯವಾಣಿ ಸುದ್ದಿಜಾಲ
ಇಂದಿನ ಪ್ರಶ್ನೆ
ಪ್ರಾಥಮಿಕ ಶಾಲಾ ಪ್ರಧಾನ ಗುರುಗಳು ಸಹಶಿಕ್ಷಕರಿಗೆ ಗರಿಷ್ಠ ಎಷ್ಟು ಸಾಂರ್ದಭಿಕ ರಜೆಗಳನ್ನು ಮಂಜೂರು ಮಾಡಲು ಬರುತ್ತದೆ? ಶನಿವಾರ ಮತ್ತು ಸೋಮವಾರ ಸಾಂರ್ದಭಿಕ ರಜೆ ಹಾಕಿದ್ದರೆ ಭಾನುವಾರವೂ ಸಾಂರ್ದಭಿಕ ರಜೆಯಾಗಿ ಪರಿವರ್ತನೆಯಾಗುತ್ತದೆಯೆ?
| ಧರೆಪ್ಪ ಅಂಬಗೆರೆ, ಸುರಪುರ, ಯಾದಗಿರಿ
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ಅನುಬಂಧ – (ಬಿ)ಯ ನಿಯಮ (1)ರ ಪ್ರಕಾರ ಶಾಲಾ ಪ್ರಧಾನ ಗುರುಗಳು ಒಂದು ಸಲಕ್ಕೆ ಗರಿಷ್ಠ ಏಳು ದಿನಗಳಷ್ಟು ಸಾಂರ್ದಭಿಕ ರಜೆಯನ್ನು ಮಂಜೂರು ಮಾಡಬಹುದು. ಆದರೆ ಭಾನುವಾರ ಸಾರ್ವತ್ರಿಕ ರಜೆ ಆಗಿರುವುದರಿಂದ ಅದು ಸಾಂರ್ದಭಿಕ ರಜೆಯಾಗಿ ಪರಿವರ್ತನೆಯಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರು ಬರೆದಿರುವ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕವನ್ನು ನೋಡಿ.
★★★★★
ಸಾಂದರ್ಭಿಕ ರಜೆಯ ಕುರಿತು ಕೆಲವು ಪ್ರಶ್ನೆಗಳು& ಉತ್ತರ
1. *ಒಂದು ವರ್ಷದಲ್ಲಿನ ಒಟ್ಟು CL ಗಳ ಸಂಖ್ಯೆ ಎಷ್ಟು?*
ಉ:-15.
2. *CLಗಳನ್ನು ಜಮಾ ಮಾಡುವುದು* *ಕ್ಯಾಲೆಂಡರ್ ವರ್ಷಕ್ಕೊ ಅಥವಾ ಶೈಕ್ಷಣಿಕ ವರ್ಷಕ್ಕೊ?*
ಉ:-ಕ್ಯಾಲೆಂಡರ್ ವರ್ಷಕ್ಕೆ.
3. *ಉಳಿದ CL ಗಳನ್ನು ಮುಂದಿನ* *ವರ್ಷಕ್ಕೆ ಕೊಂಡೊಯ್ಯಬಹುದೆ?
ಉ:-ಇಲ್ಲ.ಉಳಿದ CL ಗಳು ವ್ಯರ್ಥ ವೇ ಸರಿ.
4. *CL ಗಳು ನಮ್ಮ ಹಕ್ಕುಗಳೇ?
ಉ:-ಯಾವ ರೀತಿಯ ರಜೆಗಳೂ ನಮ್ಮ ಹಕ್ಕುಗಳಲ್ಲ.
5. *ಶಾಲೆಗಳಲ್ಲಿ CLಮಂಜೂರು ಮಾಡುವವರು ಯಾರು?
ಉ:-ಮುಖ್ಯ ಶಿಕ್ಷಕರು.
6. *ನಿರಂತರವಾಗಿ ಎಷ್ಟು CL ಗಳನ್ನು ಬಳಸಬಹುದು.?*
ಉ:ನಿರಂತರವಾಗಿ 7 CL ಗಳನ್ನು ಬಳಸಬಹುದು.
* ಸಾರ್ವತ್ರಿಕ ರಜೆಗಳು ಸೇರಿದ್ದರೆ 10 CL ಗಳನ್ನು ಬಳಸಬಹುದು.
7. *ಮುಖ್ಯಶಿಕ್ಷಕರು ನಿರಂತರ ಎಷ್ಟು CL ಗಳನ್ನು ಮಂಜೂರು ಮಾಡಬಹುದು.?
ಉ:-Kcsr ನಂತೆ ನಿರಂತರ. 7 CL ಗಳನ್ನೂ ಮುಖ್ಯಶಿಕ್ಷಕರೇ ಮಂಜೂರು ಮಾಡಬಹುದು.ಆದರೆ ಇಲಾಖೆಯ ಸುತ್ತೋಲೆಯಂತೆ ನಿರಂತರ 5 CL ಗಳನ್ನು ಮುಖ್ಯಶಿಕ್ಷಕರು ಮಂಜೂರು ಮಾಡಬಹುದು.ಮತ್ತೆ ಪಡೆಯಲು ಮೇಲಾಧಿಕಾರಿಗಳ ಅನುಮತಿ ಅಗತ್ಯ.
8. *ಶನಿವಾರ CL ಪಡೆದಿದ್ದರೆ ಭಾನುವಾರವೂ CL ಆಗುತ್ತದ್ದೆಯೇ?
ಉ:- ಇಲ್ಲ.
*ಯಾವುದೇ ಸಾರ್ವತ್ರಿಕ ರಜೆಗಳಂದು CL ನಮೂದಿಸುವಂತ್ತಿಲ್ಲ.
9. *ನಿರ್ಬಂಧಿತ ರಜೆ ಯೊಂದಿಗೆ CL ಜೋಡಿಸಬಹುದೇ?*
ಉ:-ಜೋಡಿಸಿ ನಿರಂತರವಾಗಿ ಹಾಕಬಹುದು.
10. *ಡಿಸೆಂಬರ್ ತಿಂಗಳಲ್ಲಿ ಗರಿಷ್ಠ ಎಷ್ಟು CL ಗಳನ್ನು ಬಳಸಬಹುದು?
ಉ:-ಡಿಸೆಂಬರ್ ಅಥವಾ ಯಾವುದೇ ತಿಂಗಳಲ್ಲಿ ಇಂತಿಷ್ಟೆ CL ಬಳಸಬೇಕೆಂಬ ನಿಯಮವಿರುವುದಿಲ್ಲ.
* ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಆದೇಶದಂತೆ ಡಿಸೆಂಬರ್ ತಿಂಗಳಲ್ಲಿ 2 CL ಗಳನ್ನು ಮಾತ್ರ ಬಳಸಲು ಆದೇಶವಾಗಿರುತ್ತದೆ.
ಗಮನಿಸಿ ಈ ಆದೇಶ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರಿಗೆ ಮಾತ್ರ ಅನ್ವಯವಾಗುತ್ತದೆ.ಇದು ಎಲ್ಲಾ ಜಿಲ್ಲೆಯವರಿಗಲ್ಲ.ಅದರಲ್ಲೂ ಪ್ರಾಥಮಿಕ ಶಾಲೆಗಳಿಗೆ ಎಲ್ಲೂ ಆದೇಶವಾಗಿರುವುದಿಲ್ಲ,ಅನಗತ್ಯ ಗೊಂದಲ ಊಹಾಪೋಹ ಬೇಡ.
11. *ಹೊಸದಾಗಿ ಸೇವೆಗೆ ಸೇರಿದ ಶಿಕ್ಷಕರಿಗೆ CL ಹೇಗೆ ನೀಡುವುದು?
ಉ:- ಹೊಸ ಶಿಕ್ಷಕರಿಗೆ ಮುಂಗಡವಾಗಿ CL ಗಳು ದೊರಕುವುದಿಲ್ಲ.ಅವರು ಒಂದು ವರ್ಷ ಸೇವೆ ಪೂರ್ಣಗೊಳಿಸಿದ ನಂತರ ಮುಂಗಡ 15 CL ಗಳು ದೊರಕುತ್ತವೆ.ಅಲ್ಲಿಯವರೆಗೆ ಅವರು ಪ್ರತೀ ಒಂದು ತಿಂಗಳ ಪೂರ್ಣ ಸೇವೆಯ ನಂತರ 1 CL ಪಡೆಯುತ್ತಾ ಹೋಗುತ್ತಾರೆ.
12. *ಎಲ್ಲಾ 15 CL ಗಳು ಮುಗಿದ ನಂತರ ಮುಂಗಡವಾಗಿ CL ಪಡೆಯಬಹುದೆ?
ಉ:- ಇಲ್ಲ. Ml
13. *CL ಪಡೆಯಲು ಮುಖ್ಯಶಿಕ್ಷಕರ ಪೂರ್ವಾನುಮತಿ ಅಗತ್ಯವೆ?
ಉ:- ಹೌದು.
*ಆದರೆ ಅನಾರೋಗ್ಯ, ಮತ್ತಿತರ ಬೇರೆ ಸಾಧ್ಯತೆಗಳೇ ಇಲ್ಲದ ಸಂದರ್ಭದಲ್ಲಿ ಮಾತ್ರ ವಿನಾಯಿತಿ ಇದೆ.ಆದರೆ ಪೂರಕ ದಾಖಲೆ ಒದಗಿಸಿ ಸಮಜಾಯಿಸಿ ನೀಡಬೇಕು
〰🌺〰
ಎರಡನೇ ವಿವಾಹವಾದರೆ ನನಗೆ ಪತಿಯ ಕುಟುಂಬ ನಿವೃತ್ತಿವೇತನ ಮುಂದುವರಿಯುವುದೆ ಅಥವಾ ಇಲ್ಲವೆ?
▪▪
ಸರ್ಕಾರಿ ಕಾರ್ನರ್
Thursday, 22.02.2018, 3:02 AM ವಿಜಯವಾಣಿ ಸುದ್ದಿಜಾಲ
ದಿನದ ಪ್ರಶ್ನೆ
ನಾನು ಸರ್ಕಾರಿ ನೌಕರಳಾಗಿದ್ದು ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ನಮ್ಮ ಪತಿ ನಿಧನರಾದರು. 26 ವರ್ಷದ ನನಗೆ ಮೂರು ವರ್ಷದ ಒಂದು ಹೆಣ್ಣುಮಗು ಇದೆ. ಎರಡನೇ ವಿವಾಹವಾದರೆ ನನಗೆ ಪತಿಯ ಕುಟುಂಬ ನಿವೃತ್ತಿವೇತನ ಮುಂದುವರಿಯುವುದೆ ಅಥವಾ ಇಲ್ಲವೆ?
| ಬಿ.ಎನ್. ರಾಧಾ ಚಿಕ್ಕಮಗಳೂರು
ಕರ್ನಾಟಕ ಸರ್ಕಾರಿ ಸೇವಾ (ಕುಟುಂಬ ನಿವೃತ್ತಿವೇತನ) ನಿಯಮಗಳು 2002ರ ನಿಯಮ 9 ಡಿ ಪ್ರಕಾರ; ವಿಧವೆ ಪುನರ್ವಿವಾಹವಾದರೆ ಆ ದಿನಾಂಕದ ನಂತರ ಅವಳ ಹೆಣ್ಣುಮಗುವಿಗೆ 21 ವರ್ಷ ಪೂರ್ಣವಾಗುವವರೆಗೂ ಈ ಕುಟುಂಬ ನಿವೃತ್ತಿವೇತನವನ್ನು ಮಂಜೂರು ಮಾಡಬಹುದೆಂದು ತಿಳಿಸಲಾಗಿದೆ. ಆದ್ದರಿಂದ ನೀವು ನೇಮಕಾತಿ ಪ್ರಾಧಿಕಾರಕ್ಕೆ ನಮೂನೆ ಎಫ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿ, ನಿಮ್ಮ ಮಗುವಿಗೆ ಈ ಪಿಂಚಣಿ ಲಭ್ಯವಾಗುವಂತೆ ಮಾಡಬಹುದು.
ಸರ್ಕಾರಿ ಕಾರ್ನರ್
Thursday, 22.02.2018, 3:02 AM ವಿಜಯವಾಣಿ ಸುದ್ದಿಜಾಲ
ದಿನದ ಪ್ರಶ್ನೆ
ನಾನು ಸರ್ಕಾರಿ ನೌಕರಳಾಗಿದ್ದು ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ನಮ್ಮ ಪತಿ ನಿಧನರಾದರು. 26 ವರ್ಷದ ನನಗೆ ಮೂರು ವರ್ಷದ ಒಂದು ಹೆಣ್ಣುಮಗು ಇದೆ. ಎರಡನೇ ವಿವಾಹವಾದರೆ ನನಗೆ ಪತಿಯ ಕುಟುಂಬ ನಿವೃತ್ತಿವೇತನ ಮುಂದುವರಿಯುವುದೆ ಅಥವಾ ಇಲ್ಲವೆ?
| ಬಿ.ಎನ್. ರಾಧಾ ಚಿಕ್ಕಮಗಳೂರು
ಕರ್ನಾಟಕ ಸರ್ಕಾರಿ ಸೇವಾ (ಕುಟುಂಬ ನಿವೃತ್ತಿವೇತನ) ನಿಯಮಗಳು 2002ರ ನಿಯಮ 9 ಡಿ ಪ್ರಕಾರ; ವಿಧವೆ ಪುನರ್ವಿವಾಹವಾದರೆ ಆ ದಿನಾಂಕದ ನಂತರ ಅವಳ ಹೆಣ್ಣುಮಗುವಿಗೆ 21 ವರ್ಷ ಪೂರ್ಣವಾಗುವವರೆಗೂ ಈ ಕುಟುಂಬ ನಿವೃತ್ತಿವೇತನವನ್ನು ಮಂಜೂರು ಮಾಡಬಹುದೆಂದು ತಿಳಿಸಲಾಗಿದೆ. ಆದ್ದರಿಂದ ನೀವು ನೇಮಕಾತಿ ಪ್ರಾಧಿಕಾರಕ್ಕೆ ನಮೂನೆ ಎಫ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿ, ನಿಮ್ಮ ಮಗುವಿಗೆ ಈ ಪಿಂಚಣಿ ಲಭ್ಯವಾಗುವಂತೆ ಮಾಡಬಹುದು.
ನೂತನ ಪಿಂಚಣಿ ಯೋಜನೆ
ನೂತನ ಪಿಂಚಣಿ ಯೋಜನೆ
ವಿಜಯವಾಣಿ ಸುದ್ದಿಜಾಲ
ಲ. ರಾಘವೇಂದ್ರ
ಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಸರ್ಕಾರಿ ನೌಕರನು ಸೇವಾ ಕಾನೂನಿನ ಚೌಕಟ್ಟಿಗೆ ಒಳಗಾಗಿ ಕೆಲಸ ಮಾಡಬೇಕಾಗುತ್ತದೆ. ಈ ರೀತಿಯಾಗಿ 25-35 ವರ್ಷ ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತನಾಗುವ ನೌಕರನಿಗೆ ಸರ್ಕಾರವು ಈ ಹಿಂದೆ ನಿಶ್ಚಿತ ಪಿಂಚಣಿ ಸೌಲಭ್ಯ ನೀಡುತ್ತಿತ್ತು. ಈ ರೀತಿ ಪಿಂಚಣಿ ಸೌಲಭ್ಯ ಪಡೆಯುತ್ತಿರುವ ಸರ್ಕಾರಿ ನೌಕರರಲ್ಲಿ ಒಂದು ಜೀವನದ ಭದ್ರತೆ ಉಂಟಾಗುತ್ತಿತ್ತು. ಈ ರೀತಿಯ ಜೀವನ ಭದ್ರತೆಗೆ ಒಳಗಾಗಿರುವ 5.8 ಲಕ್ಷ ಪಿಂಚಣಿದಾರರು ಇಂದು ನಮ್ಮ ರಾಜ್ಯದಲ್ಲಿದ್ದಾರೆ.
ಸರ್ವೇಚ್ಛ ನ್ಯಾಯಾಲಯವು ‘ಪಿಂಚಣಿ ಎಂಬುದು ನೌಕರರಿಗೆ ನೀಡುವ ಭಿಕ್ಷೆಯಲ್ಲ ನೌಕರರು ದೀರ್ಘಾವಧಿ ಮಾಡಿದ ಸೇವೆ ಹಾಗೂ ಸೇವಾವಧಿಯಲ್ಲಿ ನೌಕರನು ಪಡೆದ ಜೀವನಾವಶ್ಯಕ ವೇತನಕ್ಕಿಂತ ಕಡಿಮೆ ವೇತನ ಪಿಂಚಣಿಯ ರೂಪದಲ್ಲಿ ಇಳಿವಯಸ್ಸಿನಲ್ಲಿ ಸಾಮಾಜಿಕ ಆರ್ಥಿಕ ಭದ್ರತೆಗಾಗಿ ನೀಡುವಂತದ್ದು. ಇದನ್ನು ಮುಂದೂಡಿದ ವೇತನವೆಂದು ಅರ್ಥೈಸಿದೆ. ಇದು ಮೂಲಭೂತ ಹಕ್ಕೆಂದು ಪರಿಗಣಿಸುವಂತೆ ಹೇಳಿದೆ. (ಎಐಆರ್-1983-ಎಸ್ಸಿ-130) ಈ ರೀತಿ ನಿಶ್ಚಿತ ಪಿಂಚಣಿ ವ್ಯವಸ್ಥೆ ಬದಲಿಸಿದ ಕೀರ್ತಿ ಹಿಂದಿನ ಎನ್ಡಿಎ ಸರ್ಕಾರಕ್ಕೆ ಸಲ್ಲುತ್ತದೆ. ಈ ನಿಶ್ಚಿತ ಪಿಂಚಣಿಯನ್ನು ಅಂಶದಾಯಿಕ ಪಿಂಚಣಿ ಯೋಜನೆಯಾಗಿ ಅಳವಡಿಸಿಕೊಳ್ಳಲು ಹಾಗೂ ವಿಶ್ವಬ್ಯಾಂಕಿನಿಂದ ಸಾಲ ದೊರಕಿಸಿಕೊಳ್ಳಲು ಅಧಿಕಾರದ ಚುಕ್ಕಾಣಿ ಹಿಡಿದ ಸರ್ಕಾರಗಳು ಮಾಡಿದ ಷಡ್ಯಂತ್ರವಾಗಿದೆ. ಈ ಯೋಜನೆಯು ಸಾಫಲ್ಯಕ್ಕಿಂತ ಇಂದು ವಿಫಲತೆಯೇ ಜಾಸ್ತಿಯಾಗಿದೆ.
ಸ್ವಾತಂತ್ರ್ಯೊತ್ತರ ಭಾರತದಲ್ಲಿ ಸರ್ಕಾರಿ ನೌಕರರು ಹಲವು ಬದಲಾವಣೆಗಳನ್ನು ಕಂಡಿದ್ದಾರೆ. ವೇತನದಲ್ಲಿ 6ಕ್ಕೆ ಏರದ 3ಕ್ಕೆ ಇಳಿಯದ ಸ್ಥಿತಿಯಲ್ಲಿದ್ದರೂ ಸರ್ಕಾರ ನೀಡುವ ನಿಶ್ಚಿತ ಪಿಂಚಣಿ ಸೌಲಭ್ಯದಿಂದಾಗಿ ಇಳಿವಯಸ್ಸಿನಲ್ಲಿ ಗೌರವಯುತ ಬಾಳ್ವೆ ನಡೆಸಬಹುದೆಂಬ ಆಶಾಭಾವನೆಯು ಯುವ ಜನಾಂಗವನ್ನು ಸರ್ಕಾರಿ ನೌಕರಿಯ ಕಡೆ ಆಕರ್ಷಿಸುತ್ತಿತ್ತು. ಆದರೆ ಇಂದು ಸರ್ಕಾರಿ ನೌಕರಿಗೆ ಸೇರುವವರಿಗೆ ಪಿಂಚಣಿ ಇಲ್ಲ ಎಂಬ ಕಹಿ ಸತ್ಯ ನಮ್ಮ ಮುಂದಿದೆ. ದಿನಾಂಕ 1-4-2004ರಿಂದ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ನೂತನ ಅಂಶದಾಯಿ ಪಿಂಚಣಿಯೋಜನೆ ಜಾರಿಗೆ ತಂದಿತು. ಈ ಯೋಜನೆಯನ್ನೇ ಅಂದು ಅಧಿಕಾರದಲ್ಲಿದ್ದ ಸರ್ಕಾರವು ದಿನಾಂಕ 1-4-2006ರಿಂದ ಕೇಂದ್ರ ಸರ್ಕಾರದ ಯೋಜನೆಯನ್ನೇ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ದಿನಾಂಕ 31-3-2006ರ ಸರ್ಕಾರದ ಆದೇಶ ಸಂಖ್ಯೆ ಎಫ್ಡಿ (ವಿಶೇಷ) 4 ಪಿಇಟಿ 2005ರ ಮೇರೆಗೆ ಅನುಷ್ಠಾನಗೊಳಿಸಿತು. ದಿನಾಂಕ 1-4-2000ದ ನಂತರ ಹೊಸದಾಗಿ ಸರ್ಕಾರಿ ಸೇವೆಗೆ ಸೇರುವ ನೌಕರರಿಗೆ ಹೊಸದಾಗಿ ವ್ಯಾಖ್ಯಾನಿಸಿದ ಅಂಶದಾಯಿ ಕೊಡುಗೆ ನಿವೃತ್ತಿವೇತನ ಯೋಜನೆಯನ್ನು ಕಡ್ಡಾಯವಾಗಿ ಜಾರಿಗೆ ತಂದಿದೆ. ಆದರೆ ಈ ಹಿಂದೆ ಸರ್ಕಾರಿ ಸೇವೆಯಲ್ಲಿದ್ದು ತದನಂತರ ತತ್ಸಮಾನ ಅಥವಾ ಮೇಲಿನ ಹುದ್ದೆಗೆ ಆಯ್ಕೆ ಪ್ರಾಧಿಕಾರಗಳ ಮೂಲಕ ಬೇರೊಂದು ಹುದ್ದೆಗೆ ಆಯ್ಕೆಯಾಗಿ ನಿಯೋಜಿತರಾದರೆ ಅಂತಹವರಿಗೆ ಹಿಂದಿನ ನಿಶ್ಚಿತ ಪಿಂಚಣಿ ಯೋಜನೆ ಅಳವಡಿಸಿಕೊಳ್ಳಲು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 224ಬಿ ರೀತ್ಯಾ 3 ವರ್ಷದೊಳಗೆ ತಮ್ಮ ಐಚ್ಛಿಕತೆ ನೀಡಲು ಅವಕಾಶ ಕಲ್ಪಿಸಲಾಗಿದೆ. 2-2-2013ರವರೆಗೆ ದಿನಾಂಕ ವಿಸ್ತರಿಸಲಾಗಿದೆ. ಅನಂತರ ನೇಮಕವಾದರೆ ನೇಮಕ ಪ್ರಾಧಿಕಾರಗಳು ಸೂಕ್ತ ಆದೇಶ ಹೊರಡಿಸುವ ಮುನ್ನ ಕ್ಲೇಮ್ ಸಮರ್ಥಿಸುವ ಸೂಕ್ತ ದಾಖಲೆಗಳನ್ನೇ ಸರ್ಕಾರದ ಅನುಮೋದನೆ ಪಡೆಯಬೇಕೆಂದು ದಿನಾಂಕ 30-10-2012ರ ಸರ್ಕಾರದ ಅಧಿಸೂಚನೆ ಸಂಖ್ಯೆ ಎಫ್ಡಿ06ಎಸ್ಆರ್ಎ2012ರಲ್ಲಿ ತಿಳಿಸಿದೆ. ಅಲ್ಲದೆ ಈ ಯೋಜನೆಯನ್ನು ದಿನಾಂಕ 30-1-2014ರ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ(ವಿಶೇಷ) 219 ಪಿಇಎನ್ 2012ರ ಮೇರೆಗೆ ಸರ್ಕಾರದ ಸ್ವಾಯತ್ತ ಸಂಸ್ಥೆಗಳಾದ ಮಂಡಳಿ ನಿಗಮಗಳು, ವಿವಿಗಳು, ರಾಜ್ಯದಿಂದ ಅನುದಾನಿತ ಪಡೆದ ಸಂಸ್ಥೆಗಳು ಹಾಗೂ ಸ್ವಾಯತ್ತ ಸಂಸ್ಥೆಗಳಲ್ಲಿ ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ದಿನಾಂಕ 26-12 ಸರ್ಕಾರಿ ಆದೇಶ ಸಂಖ್ಯೆ ಸಕಇ 352, ಮೋದೇಶಾ 2016 ಮೇರೆಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾಯಂ ಸಿಬ್ಬಂದಿಗಳಿಗೆ ಈ ಹೊಸ ಪಿಂಚಣಿ ಯೋಜನೆ ಅನುಷ್ಠಾನಗೊಳಿಸಲು ಅನುಮೋದನೆ ನೀಡಿದೆ. ಹೀಗೆ ರಾಜ್ಯ ಸರ್ಕಾರದ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಈ ಹೊಸ ಪಿಂಚಣಿ ಯೋಜನೆಗೆ ಸುಮಾರು 1.80 ಲಕ್ಷದಷ್ಟು ನೌಕರರು ಸೇರ್ಪಡೆಯಾಗಿದ್ದಾರೆ.
*ನೂತನ ಪಿಂಚಣಿ ಯೋಜನೆ ಏನು?*
ದಿನಾಂಕ 16-6-2007ರ ಸರ್ಕಾರಿ ಆದೇಶ ಸಂಖ್ಯೆ 79 ಟಿಎಆರ್ 2006ರ ಮೇರೆಗೆ ಸರ್ಕಾರಿ ನೌಕರನ ಮೂಲವೇತನದ ಮತ್ತು ಅದರ ಮೇಲೆ ದೊರೆಯುವ ತುಟ್ಟಿಭತ್ಯೆಯು ಸೇರಿ ಈ ನೂತನ ಅಂಶದಾಯಿ ಪಿಂಚಣಿ ಯೋಜನೆಯಡಿಯಲ್ಲಿ ಪಿಂಚಣಿ ನೀಡುವ ಉದ್ದೇಶಕ್ಕಾಗಿ ನೌಕರರ ವೇತನದಿಂದ ಶೇ.10ರಷ್ಟು ಕಠಾವು ಮಾಡಬೇಕೆಂದು ಸೂಚಿಸಲಾಗಿದೆ. ಹೀಗೆ ಶೇಖರಣೆಗೊಳ್ಳುವ ಮೊತ್ತವನ್ನು ವಿವಿಧ ಖಾಸಗಿ ಹಣಕಾಸಿನ ಮೂಲಕ ಷೇರು ಮಾರುಕಟ್ಟೆಯಲ್ಲಿ ತೊಡಗಿಸಲಾಗುತ್ತದೆ. 30-35 ವರ್ಷಗಳ ನಂತರ ಈ ಹಣ ಬಳಸಿದ ಕಂಪನಿಗಳು ಷೇರುಮಾರುಕಟ್ಟೆಯ ಏರಿಳಿತ ಆಧರಿಸಿ ಸದರಿ ಮೊತ್ತಕ್ಕೆ ಬಂದ ಲಾಭಾಂಶದಲ್ಲಿ ಪಿಂಚಣಿಯನ್ನು ನೌಕರರಿಗೆ ನೀಡುತ್ತದೆಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ ಹೇಳುತ್ತದೆ ಎಂದರೆ ಸರ್ಕಾರಿ ನೌಕರನು ಪಡೆಯುವ ಪಿಂಚಣಿ ಮೊತ್ತವು ಸದರಿ ಕಂಪನಿಗಳ ಲಾಭಾ ನಷ್ಟಗಳ ಮೇಲೆ ನಿರ್ಧಾರಿತವಾಗಿರುತ್ತದೆ. ಇದಕ್ಕಾಗಿ ಕಾನೂನುಗಳನ್ನು ರಚಿಸದೆ ನೌಕರರು ಹಾಗೂ ಸರ್ಕಾರ ತೊಡಗಿಸುವ ಹಣಕ್ಕೆ ಯಾವುದೇ ಭದ್ರತೆ ನೀಡದೆ ಈ ಹೊಸ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರವು 2004ರಲ್ಲಿ ಘೊಷಿಸಿದೆ. ಕೇಂದ್ರ ಸರ್ಕಾರವು 2003ರ ಆಗಸ್ಟ್ನಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಏಜೆನ್ಸಿ ಸಂಸ್ಥೆಯನ್ನು ಕೇವಲ ಒಂದು ಕಾರ್ಯಾದೇಶದ ಮೂಲಕ ರಚಿಸಿದರೂ ಕೆಲವು ಸಂವೇದನಾಶೀಲ ಜನಪ್ರತಿನಿಧಿಗಳ ಹಾಗೂ ನೌಕರರ ಸಂಘಟನೆಗಳು ಇದರ ಜಾರಿ ವಿರೋಧಿಸುತ್ತಿದ್ದುದರಿಂದ 10 ವರ್ಷಗಳ ಕಾಲ ಇದಕ್ಕೆ ಸಂಸತ್ತಿನ ಅಂಗೀಕಾರ ಪಡೆಯಲು ಸಾಧ್ಯವಾಗಿರಲಿಲ್ಲ. ಅಂತಿಮವಾಗಿ 2013ರ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಕಾಯ್ದೆಯನ್ನು ಸಂಸತ್ ಅನುಮೋದಿಸಿದೆ. ಈವರೆಗೂ ಈ ಹೊಸ ಪಿಂಚಣಿಯೋಜನೆಗೆ ಯಾವುದೇ ಅಧಿನಿಯಮ ಇಲ್ಲದೆ ಕೇವಲ ಕಾರ್ಯಾದೇಶಗಳ ಮೂಲಕ ಜಾರಿಗೆ ತರಲಾಗಿದೆ. ಇಂತಹ ಒಂದು ಕಾರ್ಯಾದೇಶವನ್ನು ಬಾಧಿತ ಸರ್ಕಾರಿ ನೌಕರರು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಇಂತಹ ಹೊಸ ಪಿಂಚಣಿ ಯೋಜನೆ ಊರ್ಜಿತವಾಗುವುದು ಕಷ್ಟ. 2006ರ ನಂತರ ರಾಜ್ಯ ಸರ್ಕಾರಿ ಕೆಲಸಕ್ಕೆ ಸೇರಿದ ನೌಕರರು ತಮ್ಮ ಹಿರಿಯ ಸಹೋದ್ಯೋಗಿಗಳಿಗಿಂತ ಶೇ.10ರಷ್ಟು ಕಡಿಮೆ ವೇತನವನ್ನು ಈ ಕಠಾವಿನಿಂದಾಗಿ ಪಡೆಯುವ ಅವಕಾಶವಾಗಿದೆ.
(ಮುಂದುವರೆಯುವುದು…..)
ವಿಜಯವಾಣಿ ಸುದ್ದಿಜಾಲ
ಲ. ರಾಘವೇಂದ್ರ
ಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಸರ್ಕಾರಿ ನೌಕರನು ಸೇವಾ ಕಾನೂನಿನ ಚೌಕಟ್ಟಿಗೆ ಒಳಗಾಗಿ ಕೆಲಸ ಮಾಡಬೇಕಾಗುತ್ತದೆ. ಈ ರೀತಿಯಾಗಿ 25-35 ವರ್ಷ ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತನಾಗುವ ನೌಕರನಿಗೆ ಸರ್ಕಾರವು ಈ ಹಿಂದೆ ನಿಶ್ಚಿತ ಪಿಂಚಣಿ ಸೌಲಭ್ಯ ನೀಡುತ್ತಿತ್ತು. ಈ ರೀತಿ ಪಿಂಚಣಿ ಸೌಲಭ್ಯ ಪಡೆಯುತ್ತಿರುವ ಸರ್ಕಾರಿ ನೌಕರರಲ್ಲಿ ಒಂದು ಜೀವನದ ಭದ್ರತೆ ಉಂಟಾಗುತ್ತಿತ್ತು. ಈ ರೀತಿಯ ಜೀವನ ಭದ್ರತೆಗೆ ಒಳಗಾಗಿರುವ 5.8 ಲಕ್ಷ ಪಿಂಚಣಿದಾರರು ಇಂದು ನಮ್ಮ ರಾಜ್ಯದಲ್ಲಿದ್ದಾರೆ.
ಸರ್ವೇಚ್ಛ ನ್ಯಾಯಾಲಯವು ‘ಪಿಂಚಣಿ ಎಂಬುದು ನೌಕರರಿಗೆ ನೀಡುವ ಭಿಕ್ಷೆಯಲ್ಲ ನೌಕರರು ದೀರ್ಘಾವಧಿ ಮಾಡಿದ ಸೇವೆ ಹಾಗೂ ಸೇವಾವಧಿಯಲ್ಲಿ ನೌಕರನು ಪಡೆದ ಜೀವನಾವಶ್ಯಕ ವೇತನಕ್ಕಿಂತ ಕಡಿಮೆ ವೇತನ ಪಿಂಚಣಿಯ ರೂಪದಲ್ಲಿ ಇಳಿವಯಸ್ಸಿನಲ್ಲಿ ಸಾಮಾಜಿಕ ಆರ್ಥಿಕ ಭದ್ರತೆಗಾಗಿ ನೀಡುವಂತದ್ದು. ಇದನ್ನು ಮುಂದೂಡಿದ ವೇತನವೆಂದು ಅರ್ಥೈಸಿದೆ. ಇದು ಮೂಲಭೂತ ಹಕ್ಕೆಂದು ಪರಿಗಣಿಸುವಂತೆ ಹೇಳಿದೆ. (ಎಐಆರ್-1983-ಎಸ್ಸಿ-130) ಈ ರೀತಿ ನಿಶ್ಚಿತ ಪಿಂಚಣಿ ವ್ಯವಸ್ಥೆ ಬದಲಿಸಿದ ಕೀರ್ತಿ ಹಿಂದಿನ ಎನ್ಡಿಎ ಸರ್ಕಾರಕ್ಕೆ ಸಲ್ಲುತ್ತದೆ. ಈ ನಿಶ್ಚಿತ ಪಿಂಚಣಿಯನ್ನು ಅಂಶದಾಯಿಕ ಪಿಂಚಣಿ ಯೋಜನೆಯಾಗಿ ಅಳವಡಿಸಿಕೊಳ್ಳಲು ಹಾಗೂ ವಿಶ್ವಬ್ಯಾಂಕಿನಿಂದ ಸಾಲ ದೊರಕಿಸಿಕೊಳ್ಳಲು ಅಧಿಕಾರದ ಚುಕ್ಕಾಣಿ ಹಿಡಿದ ಸರ್ಕಾರಗಳು ಮಾಡಿದ ಷಡ್ಯಂತ್ರವಾಗಿದೆ. ಈ ಯೋಜನೆಯು ಸಾಫಲ್ಯಕ್ಕಿಂತ ಇಂದು ವಿಫಲತೆಯೇ ಜಾಸ್ತಿಯಾಗಿದೆ.
ಸ್ವಾತಂತ್ರ್ಯೊತ್ತರ ಭಾರತದಲ್ಲಿ ಸರ್ಕಾರಿ ನೌಕರರು ಹಲವು ಬದಲಾವಣೆಗಳನ್ನು ಕಂಡಿದ್ದಾರೆ. ವೇತನದಲ್ಲಿ 6ಕ್ಕೆ ಏರದ 3ಕ್ಕೆ ಇಳಿಯದ ಸ್ಥಿತಿಯಲ್ಲಿದ್ದರೂ ಸರ್ಕಾರ ನೀಡುವ ನಿಶ್ಚಿತ ಪಿಂಚಣಿ ಸೌಲಭ್ಯದಿಂದಾಗಿ ಇಳಿವಯಸ್ಸಿನಲ್ಲಿ ಗೌರವಯುತ ಬಾಳ್ವೆ ನಡೆಸಬಹುದೆಂಬ ಆಶಾಭಾವನೆಯು ಯುವ ಜನಾಂಗವನ್ನು ಸರ್ಕಾರಿ ನೌಕರಿಯ ಕಡೆ ಆಕರ್ಷಿಸುತ್ತಿತ್ತು. ಆದರೆ ಇಂದು ಸರ್ಕಾರಿ ನೌಕರಿಗೆ ಸೇರುವವರಿಗೆ ಪಿಂಚಣಿ ಇಲ್ಲ ಎಂಬ ಕಹಿ ಸತ್ಯ ನಮ್ಮ ಮುಂದಿದೆ. ದಿನಾಂಕ 1-4-2004ರಿಂದ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ನೂತನ ಅಂಶದಾಯಿ ಪಿಂಚಣಿಯೋಜನೆ ಜಾರಿಗೆ ತಂದಿತು. ಈ ಯೋಜನೆಯನ್ನೇ ಅಂದು ಅಧಿಕಾರದಲ್ಲಿದ್ದ ಸರ್ಕಾರವು ದಿನಾಂಕ 1-4-2006ರಿಂದ ಕೇಂದ್ರ ಸರ್ಕಾರದ ಯೋಜನೆಯನ್ನೇ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ದಿನಾಂಕ 31-3-2006ರ ಸರ್ಕಾರದ ಆದೇಶ ಸಂಖ್ಯೆ ಎಫ್ಡಿ (ವಿಶೇಷ) 4 ಪಿಇಟಿ 2005ರ ಮೇರೆಗೆ ಅನುಷ್ಠಾನಗೊಳಿಸಿತು. ದಿನಾಂಕ 1-4-2000ದ ನಂತರ ಹೊಸದಾಗಿ ಸರ್ಕಾರಿ ಸೇವೆಗೆ ಸೇರುವ ನೌಕರರಿಗೆ ಹೊಸದಾಗಿ ವ್ಯಾಖ್ಯಾನಿಸಿದ ಅಂಶದಾಯಿ ಕೊಡುಗೆ ನಿವೃತ್ತಿವೇತನ ಯೋಜನೆಯನ್ನು ಕಡ್ಡಾಯವಾಗಿ ಜಾರಿಗೆ ತಂದಿದೆ. ಆದರೆ ಈ ಹಿಂದೆ ಸರ್ಕಾರಿ ಸೇವೆಯಲ್ಲಿದ್ದು ತದನಂತರ ತತ್ಸಮಾನ ಅಥವಾ ಮೇಲಿನ ಹುದ್ದೆಗೆ ಆಯ್ಕೆ ಪ್ರಾಧಿಕಾರಗಳ ಮೂಲಕ ಬೇರೊಂದು ಹುದ್ದೆಗೆ ಆಯ್ಕೆಯಾಗಿ ನಿಯೋಜಿತರಾದರೆ ಅಂತಹವರಿಗೆ ಹಿಂದಿನ ನಿಶ್ಚಿತ ಪಿಂಚಣಿ ಯೋಜನೆ ಅಳವಡಿಸಿಕೊಳ್ಳಲು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 224ಬಿ ರೀತ್ಯಾ 3 ವರ್ಷದೊಳಗೆ ತಮ್ಮ ಐಚ್ಛಿಕತೆ ನೀಡಲು ಅವಕಾಶ ಕಲ್ಪಿಸಲಾಗಿದೆ. 2-2-2013ರವರೆಗೆ ದಿನಾಂಕ ವಿಸ್ತರಿಸಲಾಗಿದೆ. ಅನಂತರ ನೇಮಕವಾದರೆ ನೇಮಕ ಪ್ರಾಧಿಕಾರಗಳು ಸೂಕ್ತ ಆದೇಶ ಹೊರಡಿಸುವ ಮುನ್ನ ಕ್ಲೇಮ್ ಸಮರ್ಥಿಸುವ ಸೂಕ್ತ ದಾಖಲೆಗಳನ್ನೇ ಸರ್ಕಾರದ ಅನುಮೋದನೆ ಪಡೆಯಬೇಕೆಂದು ದಿನಾಂಕ 30-10-2012ರ ಸರ್ಕಾರದ ಅಧಿಸೂಚನೆ ಸಂಖ್ಯೆ ಎಫ್ಡಿ06ಎಸ್ಆರ್ಎ2012ರಲ್ಲಿ ತಿಳಿಸಿದೆ. ಅಲ್ಲದೆ ಈ ಯೋಜನೆಯನ್ನು ದಿನಾಂಕ 30-1-2014ರ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ(ವಿಶೇಷ) 219 ಪಿಇಎನ್ 2012ರ ಮೇರೆಗೆ ಸರ್ಕಾರದ ಸ್ವಾಯತ್ತ ಸಂಸ್ಥೆಗಳಾದ ಮಂಡಳಿ ನಿಗಮಗಳು, ವಿವಿಗಳು, ರಾಜ್ಯದಿಂದ ಅನುದಾನಿತ ಪಡೆದ ಸಂಸ್ಥೆಗಳು ಹಾಗೂ ಸ್ವಾಯತ್ತ ಸಂಸ್ಥೆಗಳಲ್ಲಿ ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ದಿನಾಂಕ 26-12 ಸರ್ಕಾರಿ ಆದೇಶ ಸಂಖ್ಯೆ ಸಕಇ 352, ಮೋದೇಶಾ 2016 ಮೇರೆಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾಯಂ ಸಿಬ್ಬಂದಿಗಳಿಗೆ ಈ ಹೊಸ ಪಿಂಚಣಿ ಯೋಜನೆ ಅನುಷ್ಠಾನಗೊಳಿಸಲು ಅನುಮೋದನೆ ನೀಡಿದೆ. ಹೀಗೆ ರಾಜ್ಯ ಸರ್ಕಾರದ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಈ ಹೊಸ ಪಿಂಚಣಿ ಯೋಜನೆಗೆ ಸುಮಾರು 1.80 ಲಕ್ಷದಷ್ಟು ನೌಕರರು ಸೇರ್ಪಡೆಯಾಗಿದ್ದಾರೆ.
*ನೂತನ ಪಿಂಚಣಿ ಯೋಜನೆ ಏನು?*
ದಿನಾಂಕ 16-6-2007ರ ಸರ್ಕಾರಿ ಆದೇಶ ಸಂಖ್ಯೆ 79 ಟಿಎಆರ್ 2006ರ ಮೇರೆಗೆ ಸರ್ಕಾರಿ ನೌಕರನ ಮೂಲವೇತನದ ಮತ್ತು ಅದರ ಮೇಲೆ ದೊರೆಯುವ ತುಟ್ಟಿಭತ್ಯೆಯು ಸೇರಿ ಈ ನೂತನ ಅಂಶದಾಯಿ ಪಿಂಚಣಿ ಯೋಜನೆಯಡಿಯಲ್ಲಿ ಪಿಂಚಣಿ ನೀಡುವ ಉದ್ದೇಶಕ್ಕಾಗಿ ನೌಕರರ ವೇತನದಿಂದ ಶೇ.10ರಷ್ಟು ಕಠಾವು ಮಾಡಬೇಕೆಂದು ಸೂಚಿಸಲಾಗಿದೆ. ಹೀಗೆ ಶೇಖರಣೆಗೊಳ್ಳುವ ಮೊತ್ತವನ್ನು ವಿವಿಧ ಖಾಸಗಿ ಹಣಕಾಸಿನ ಮೂಲಕ ಷೇರು ಮಾರುಕಟ್ಟೆಯಲ್ಲಿ ತೊಡಗಿಸಲಾಗುತ್ತದೆ. 30-35 ವರ್ಷಗಳ ನಂತರ ಈ ಹಣ ಬಳಸಿದ ಕಂಪನಿಗಳು ಷೇರುಮಾರುಕಟ್ಟೆಯ ಏರಿಳಿತ ಆಧರಿಸಿ ಸದರಿ ಮೊತ್ತಕ್ಕೆ ಬಂದ ಲಾಭಾಂಶದಲ್ಲಿ ಪಿಂಚಣಿಯನ್ನು ನೌಕರರಿಗೆ ನೀಡುತ್ತದೆಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ ಹೇಳುತ್ತದೆ ಎಂದರೆ ಸರ್ಕಾರಿ ನೌಕರನು ಪಡೆಯುವ ಪಿಂಚಣಿ ಮೊತ್ತವು ಸದರಿ ಕಂಪನಿಗಳ ಲಾಭಾ ನಷ್ಟಗಳ ಮೇಲೆ ನಿರ್ಧಾರಿತವಾಗಿರುತ್ತದೆ. ಇದಕ್ಕಾಗಿ ಕಾನೂನುಗಳನ್ನು ರಚಿಸದೆ ನೌಕರರು ಹಾಗೂ ಸರ್ಕಾರ ತೊಡಗಿಸುವ ಹಣಕ್ಕೆ ಯಾವುದೇ ಭದ್ರತೆ ನೀಡದೆ ಈ ಹೊಸ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರವು 2004ರಲ್ಲಿ ಘೊಷಿಸಿದೆ. ಕೇಂದ್ರ ಸರ್ಕಾರವು 2003ರ ಆಗಸ್ಟ್ನಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಏಜೆನ್ಸಿ ಸಂಸ್ಥೆಯನ್ನು ಕೇವಲ ಒಂದು ಕಾರ್ಯಾದೇಶದ ಮೂಲಕ ರಚಿಸಿದರೂ ಕೆಲವು ಸಂವೇದನಾಶೀಲ ಜನಪ್ರತಿನಿಧಿಗಳ ಹಾಗೂ ನೌಕರರ ಸಂಘಟನೆಗಳು ಇದರ ಜಾರಿ ವಿರೋಧಿಸುತ್ತಿದ್ದುದರಿಂದ 10 ವರ್ಷಗಳ ಕಾಲ ಇದಕ್ಕೆ ಸಂಸತ್ತಿನ ಅಂಗೀಕಾರ ಪಡೆಯಲು ಸಾಧ್ಯವಾಗಿರಲಿಲ್ಲ. ಅಂತಿಮವಾಗಿ 2013ರ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಕಾಯ್ದೆಯನ್ನು ಸಂಸತ್ ಅನುಮೋದಿಸಿದೆ. ಈವರೆಗೂ ಈ ಹೊಸ ಪಿಂಚಣಿಯೋಜನೆಗೆ ಯಾವುದೇ ಅಧಿನಿಯಮ ಇಲ್ಲದೆ ಕೇವಲ ಕಾರ್ಯಾದೇಶಗಳ ಮೂಲಕ ಜಾರಿಗೆ ತರಲಾಗಿದೆ. ಇಂತಹ ಒಂದು ಕಾರ್ಯಾದೇಶವನ್ನು ಬಾಧಿತ ಸರ್ಕಾರಿ ನೌಕರರು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಇಂತಹ ಹೊಸ ಪಿಂಚಣಿ ಯೋಜನೆ ಊರ್ಜಿತವಾಗುವುದು ಕಷ್ಟ. 2006ರ ನಂತರ ರಾಜ್ಯ ಸರ್ಕಾರಿ ಕೆಲಸಕ್ಕೆ ಸೇರಿದ ನೌಕರರು ತಮ್ಮ ಹಿರಿಯ ಸಹೋದ್ಯೋಗಿಗಳಿಗಿಂತ ಶೇ.10ರಷ್ಟು ಕಡಿಮೆ ವೇತನವನ್ನು ಈ ಕಠಾವಿನಿಂದಾಗಿ ಪಡೆಯುವ ಅವಕಾಶವಾಗಿದೆ.
(ಮುಂದುವರೆಯುವುದು…..)
Subscribe to:
Comments (Atom)
ಅನುಕಂಪದ ಆಧಾರದ ಮೇಲೆ
ಸರ್ಕಾರಿ ಕಾರ್ನರ್ Friday, 31.08.2018, 3:00 AM ವಿಜಯವಾಣಿ ಸುದ್ದಿಜಾಲ ದಿನದ ಪ್ರಶ್ನೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ನನ್ನ ತಂದೆ ಸೇವೆ...
-
ರಜಾ ನಿಯಮಗಳು ಪೂರ್ಣ ವಿವರಣೆಯೊಂದಿಗೆ ರಜಾ ನಿಯಮಗಳು ( ಕೆ.ಸಿ.ಎಸ್.ಆರ್.ನಿಯಮ105 ರಿಂದ 206) ಸರ್ಕಾರಿ ನೌಕರರು ಈ ಕೆಳಕಂಡ ನಿಬಂಧನೆಗೆ ಒಳಪಟ್ಟು ರಜ...
-
*ರಜೆ ಸೌಲಭ್ಯದ ನಿಯಮಗಳು* ರಜೆಯನ್ನು ಗೃಹಕೃತ್ಯಕ್ಕಾಗಿ ಅಥವಾ ವೈದ್ಯಕೀಯ ಕಾರಣಗಳಿಗಾಗಿ ಮಂಜೂರು ಮಾಡಬಹುದು. ಗೃಹಕೃತ್ಯಕ್ಕಾಗಿ ಬಳಸಿಕೊಂಡ ಅಸಾಧಾರಣ ರಜೆ ಅವಧಿಯನ್ನು...










