Saturday, 24 February 2018

ನೂತನ ಪಿಂಚಣಿ ಯೋಜನೆ

ನೂತನ ಪಿಂಚಣಿ ಯೋಜನೆ

  ವಿಜಯವಾಣಿ ಸುದ್ದಿಜಾಲ


 ಲ. ರಾಘವೇಂದ್ರ

ಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಸರ್ಕಾರಿ ನೌಕರನು ಸೇವಾ ಕಾನೂನಿನ ಚೌಕಟ್ಟಿಗೆ ಒಳಗಾಗಿ ಕೆಲಸ ಮಾಡಬೇಕಾಗುತ್ತದೆ. ಈ ರೀತಿಯಾಗಿ 25-35 ವರ್ಷ ಸರ್ಕಾರಿ ಸೇವೆ ಸಲ್ಲಿಸಿ ನಿವೃತ್ತನಾಗುವ ನೌಕರನಿಗೆ ಸರ್ಕಾರವು ಈ ಹಿಂದೆ ನಿಶ್ಚಿತ ಪಿಂಚಣಿ ಸೌಲಭ್ಯ ನೀಡುತ್ತಿತ್ತು. ಈ ರೀತಿ ಪಿಂಚಣಿ ಸೌಲಭ್ಯ ಪಡೆಯುತ್ತಿರುವ ಸರ್ಕಾರಿ ನೌಕರರಲ್ಲಿ ಒಂದು ಜೀವನದ ಭದ್ರತೆ ಉಂಟಾಗುತ್ತಿತ್ತು. ಈ ರೀತಿಯ ಜೀವನ ಭದ್ರತೆಗೆ ಒಳಗಾಗಿರುವ 5.8 ಲಕ್ಷ ಪಿಂಚಣಿದಾರರು ಇಂದು ನಮ್ಮ ರಾಜ್ಯದಲ್ಲಿದ್ದಾರೆ.

ಸರ್ವೇಚ್ಛ ನ್ಯಾಯಾಲಯವು ‘ಪಿಂಚಣಿ ಎಂಬುದು ನೌಕರರಿಗೆ ನೀಡುವ ಭಿಕ್ಷೆಯಲ್ಲ ನೌಕರರು ದೀರ್ಘಾವಧಿ ಮಾಡಿದ ಸೇವೆ ಹಾಗೂ ಸೇವಾವಧಿಯಲ್ಲಿ ನೌಕರನು ಪಡೆದ ಜೀವನಾವಶ್ಯಕ ವೇತನಕ್ಕಿಂತ ಕಡಿಮೆ ವೇತನ ಪಿಂಚಣಿಯ ರೂಪದಲ್ಲಿ ಇಳಿವಯಸ್ಸಿನಲ್ಲಿ ಸಾಮಾಜಿಕ ಆರ್ಥಿಕ ಭದ್ರತೆಗಾಗಿ ನೀಡುವಂತದ್ದು. ಇದನ್ನು ಮುಂದೂಡಿದ ವೇತನವೆಂದು ಅರ್ಥೈಸಿದೆ. ಇದು ಮೂಲಭೂತ ಹಕ್ಕೆಂದು ಪರಿಗಣಿಸುವಂತೆ ಹೇಳಿದೆ. (ಎಐಆರ್-1983-ಎಸ್​ಸಿ-130) ಈ ರೀತಿ ನಿಶ್ಚಿತ ಪಿಂಚಣಿ ವ್ಯವಸ್ಥೆ ಬದಲಿಸಿದ ಕೀರ್ತಿ ಹಿಂದಿನ ಎನ್​ಡಿಎ ಸರ್ಕಾರಕ್ಕೆ ಸಲ್ಲುತ್ತದೆ. ಈ ನಿಶ್ಚಿತ ಪಿಂಚಣಿಯನ್ನು ಅಂಶದಾಯಿಕ ಪಿಂಚಣಿ ಯೋಜನೆಯಾಗಿ ಅಳವಡಿಸಿಕೊಳ್ಳಲು ಹಾಗೂ ವಿಶ್ವಬ್ಯಾಂಕಿನಿಂದ ಸಾಲ ದೊರಕಿಸಿಕೊಳ್ಳಲು ಅಧಿಕಾರದ ಚುಕ್ಕಾಣಿ ಹಿಡಿದ ಸರ್ಕಾರಗಳು ಮಾಡಿದ ಷಡ್ಯಂತ್ರವಾಗಿದೆ. ಈ ಯೋಜನೆಯು ಸಾಫಲ್ಯಕ್ಕಿಂತ ಇಂದು ವಿಫಲತೆಯೇ ಜಾಸ್ತಿಯಾಗಿದೆ.

ಸ್ವಾತಂತ್ರ್ಯೊತ್ತರ ಭಾರತದಲ್ಲಿ ಸರ್ಕಾರಿ ನೌಕರರು ಹಲವು ಬದಲಾವಣೆಗಳನ್ನು ಕಂಡಿದ್ದಾರೆ. ವೇತನದಲ್ಲಿ 6ಕ್ಕೆ ಏರದ 3ಕ್ಕೆ ಇಳಿಯದ ಸ್ಥಿತಿಯಲ್ಲಿದ್ದರೂ ಸರ್ಕಾರ ನೀಡುವ ನಿಶ್ಚಿತ ಪಿಂಚಣಿ ಸೌಲಭ್ಯದಿಂದಾಗಿ ಇಳಿವಯಸ್ಸಿನಲ್ಲಿ ಗೌರವಯುತ ಬಾಳ್ವೆ ನಡೆಸಬಹುದೆಂಬ ಆಶಾಭಾವನೆಯು ಯುವ ಜನಾಂಗವನ್ನು ಸರ್ಕಾರಿ ನೌಕರಿಯ ಕಡೆ ಆಕರ್ಷಿಸುತ್ತಿತ್ತು. ಆದರೆ ಇಂದು ಸರ್ಕಾರಿ ನೌಕರಿಗೆ ಸೇರುವವರಿಗೆ ಪಿಂಚಣಿ ಇಲ್ಲ ಎಂಬ ಕಹಿ ಸತ್ಯ ನಮ್ಮ ಮುಂದಿದೆ. ದಿನಾಂಕ 1-4-2004ರಿಂದ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ನೂತನ ಅಂಶದಾಯಿ ಪಿಂಚಣಿಯೋಜನೆ ಜಾರಿಗೆ ತಂದಿತು. ಈ ಯೋಜನೆಯನ್ನೇ ಅಂದು ಅಧಿಕಾರದಲ್ಲಿದ್ದ ಸರ್ಕಾರವು ದಿನಾಂಕ 1-4-2006ರಿಂದ ಕೇಂದ್ರ ಸರ್ಕಾರದ ಯೋಜನೆಯನ್ನೇ ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ದಿನಾಂಕ 31-3-2006ರ ಸರ್ಕಾರದ ಆದೇಶ ಸಂಖ್ಯೆ ಎಫ್​ಡಿ (ವಿಶೇಷ) 4 ಪಿಇಟಿ 2005ರ ಮೇರೆಗೆ ಅನುಷ್ಠಾನಗೊಳಿಸಿತು. ದಿನಾಂಕ 1-4-2000ದ ನಂತರ ಹೊಸದಾಗಿ ಸರ್ಕಾರಿ ಸೇವೆಗೆ ಸೇರುವ ನೌಕರರಿಗೆ ಹೊಸದಾಗಿ ವ್ಯಾಖ್ಯಾನಿಸಿದ ಅಂಶದಾಯಿ ಕೊಡುಗೆ ನಿವೃತ್ತಿವೇತನ ಯೋಜನೆಯನ್ನು ಕಡ್ಡಾಯವಾಗಿ ಜಾರಿಗೆ ತಂದಿದೆ. ಆದರೆ ಈ ಹಿಂದೆ ಸರ್ಕಾರಿ ಸೇವೆಯಲ್ಲಿದ್ದು ತದನಂತರ ತತ್ಸಮಾನ ಅಥವಾ ಮೇಲಿನ ಹುದ್ದೆಗೆ ಆಯ್ಕೆ ಪ್ರಾಧಿಕಾರಗಳ ಮೂಲಕ ಬೇರೊಂದು ಹುದ್ದೆಗೆ ಆಯ್ಕೆಯಾಗಿ ನಿಯೋಜಿತರಾದರೆ ಅಂತಹವರಿಗೆ ಹಿಂದಿನ ನಿಶ್ಚಿತ ಪಿಂಚಣಿ ಯೋಜನೆ ಅಳವಡಿಸಿಕೊಳ್ಳಲು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 224ಬಿ ರೀತ್ಯಾ 3 ವರ್ಷದೊಳಗೆ ತಮ್ಮ ಐಚ್ಛಿಕತೆ ನೀಡಲು ಅವಕಾಶ ಕಲ್ಪಿಸಲಾಗಿದೆ. 2-2-2013ರವರೆಗೆ ದಿನಾಂಕ ವಿಸ್ತರಿಸಲಾಗಿದೆ. ಅನಂತರ ನೇಮಕವಾದರೆ ನೇಮಕ ಪ್ರಾಧಿಕಾರಗಳು ಸೂಕ್ತ ಆದೇಶ ಹೊರಡಿಸುವ ಮುನ್ನ ಕ್ಲೇಮ್ ಸಮರ್ಥಿಸುವ ಸೂಕ್ತ ದಾಖಲೆಗಳನ್ನೇ ಸರ್ಕಾರದ ಅನುಮೋದನೆ ಪಡೆಯಬೇಕೆಂದು ದಿನಾಂಕ 30-10-2012ರ ಸರ್ಕಾರದ ಅಧಿಸೂಚನೆ ಸಂಖ್ಯೆ ಎಫ್​ಡಿ06ಎಸ್​ಆರ್​ಎ2012ರಲ್ಲಿ ತಿಳಿಸಿದೆ. ಅಲ್ಲದೆ ಈ ಯೋಜನೆಯನ್ನು ದಿನಾಂಕ 30-1-2014ರ ಸರ್ಕಾರಿ ಆದೇಶ ಸಂಖ್ಯೆ ಎಫ್​ಡಿ(ವಿಶೇಷ) 219 ಪಿಇಎನ್ 2012ರ ಮೇರೆಗೆ ಸರ್ಕಾರದ ಸ್ವಾಯತ್ತ ಸಂಸ್ಥೆಗಳಾದ ಮಂಡಳಿ ನಿಗಮಗಳು, ವಿವಿಗಳು, ರಾಜ್ಯದಿಂದ ಅನುದಾನಿತ ಪಡೆದ ಸಂಸ್ಥೆಗಳು ಹಾಗೂ ಸ್ವಾಯತ್ತ ಸಂಸ್ಥೆಗಳಲ್ಲಿ ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ದಿನಾಂಕ 26-12 ಸರ್ಕಾರಿ ಆದೇಶ ಸಂಖ್ಯೆ ಸಕಇ 352, ಮೋದೇಶಾ 2016 ಮೇರೆಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾಯಂ ಸಿಬ್ಬಂದಿಗಳಿಗೆ ಈ ಹೊಸ ಪಿಂಚಣಿ ಯೋಜನೆ ಅನುಷ್ಠಾನಗೊಳಿಸಲು ಅನುಮೋದನೆ ನೀಡಿದೆ. ಹೀಗೆ ರಾಜ್ಯ ಸರ್ಕಾರದ ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಈ ಹೊಸ ಪಿಂಚಣಿ ಯೋಜನೆಗೆ ಸುಮಾರು 1.80 ಲಕ್ಷದಷ್ಟು ನೌಕರರು ಸೇರ್ಪಡೆಯಾಗಿದ್ದಾರೆ.

*ನೂತನ ಪಿಂಚಣಿ ಯೋಜನೆ ಏನು?*

ದಿನಾಂಕ 16-6-2007ರ ಸರ್ಕಾರಿ ಆದೇಶ ಸಂಖ್ಯೆ 79 ಟಿಎಆರ್ 2006ರ ಮೇರೆಗೆ ಸರ್ಕಾರಿ ನೌಕರನ ಮೂಲವೇತನದ ಮತ್ತು ಅದರ ಮೇಲೆ ದೊರೆಯುವ ತುಟ್ಟಿಭತ್ಯೆಯು ಸೇರಿ ಈ ನೂತನ ಅಂಶದಾಯಿ ಪಿಂಚಣಿ ಯೋಜನೆಯಡಿಯಲ್ಲಿ ಪಿಂಚಣಿ ನೀಡುವ ಉದ್ದೇಶಕ್ಕಾಗಿ ನೌಕರರ ವೇತನದಿಂದ ಶೇ.10ರಷ್ಟು ಕಠಾವು ಮಾಡಬೇಕೆಂದು ಸೂಚಿಸಲಾಗಿದೆ. ಹೀಗೆ ಶೇಖರಣೆಗೊಳ್ಳುವ ಮೊತ್ತವನ್ನು ವಿವಿಧ ಖಾಸಗಿ ಹಣಕಾಸಿನ ಮೂಲಕ ಷೇರು ಮಾರುಕಟ್ಟೆಯಲ್ಲಿ ತೊಡಗಿಸಲಾಗುತ್ತದೆ. 30-35 ವರ್ಷಗಳ ನಂತರ ಈ ಹಣ ಬಳಸಿದ ಕಂಪನಿಗಳು ಷೇರುಮಾರುಕಟ್ಟೆಯ ಏರಿಳಿತ ಆಧರಿಸಿ ಸದರಿ ಮೊತ್ತಕ್ಕೆ ಬಂದ ಲಾಭಾಂಶದಲ್ಲಿ ಪಿಂಚಣಿಯನ್ನು ನೌಕರರಿಗೆ ನೀಡುತ್ತದೆಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ ಹೇಳುತ್ತದೆ ಎಂದರೆ ಸರ್ಕಾರಿ ನೌಕರನು ಪಡೆಯುವ ಪಿಂಚಣಿ ಮೊತ್ತವು ಸದರಿ ಕಂಪನಿಗಳ ಲಾಭಾ ನಷ್ಟಗಳ ಮೇಲೆ ನಿರ್ಧಾರಿತವಾಗಿರುತ್ತದೆ. ಇದಕ್ಕಾಗಿ ಕಾನೂನುಗಳನ್ನು ರಚಿಸದೆ ನೌಕರರು ಹಾಗೂ ಸರ್ಕಾರ ತೊಡಗಿಸುವ ಹಣಕ್ಕೆ ಯಾವುದೇ ಭದ್ರತೆ ನೀಡದೆ ಈ ಹೊಸ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರವು 2004ರಲ್ಲಿ ಘೊಷಿಸಿದೆ. ಕೇಂದ್ರ ಸರ್ಕಾರವು 2003ರ ಆಗಸ್ಟ್​ನಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಏಜೆನ್ಸಿ ಸಂಸ್ಥೆಯನ್ನು ಕೇವಲ ಒಂದು ಕಾರ್ಯಾದೇಶದ ಮೂಲಕ ರಚಿಸಿದರೂ ಕೆಲವು ಸಂವೇದನಾಶೀಲ ಜನಪ್ರತಿನಿಧಿಗಳ ಹಾಗೂ ನೌಕರರ ಸಂಘಟನೆಗಳು ಇದರ ಜಾರಿ ವಿರೋಧಿಸುತ್ತಿದ್ದುದರಿಂದ 10 ವರ್ಷಗಳ ಕಾಲ ಇದಕ್ಕೆ ಸಂಸತ್ತಿನ ಅಂಗೀಕಾರ ಪಡೆಯಲು ಸಾಧ್ಯವಾಗಿರಲಿಲ್ಲ. ಅಂತಿಮವಾಗಿ 2013ರ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಕಾಯ್ದೆಯನ್ನು ಸಂಸತ್ ಅನುಮೋದಿಸಿದೆ. ಈವರೆಗೂ ಈ ಹೊಸ ಪಿಂಚಣಿಯೋಜನೆಗೆ ಯಾವುದೇ ಅಧಿನಿಯಮ ಇಲ್ಲದೆ ಕೇವಲ ಕಾರ್ಯಾದೇಶಗಳ ಮೂಲಕ ಜಾರಿಗೆ ತರಲಾಗಿದೆ. ಇಂತಹ ಒಂದು ಕಾರ್ಯಾದೇಶವನ್ನು ಬಾಧಿತ ಸರ್ಕಾರಿ ನೌಕರರು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಇಂತಹ ಹೊಸ ಪಿಂಚಣಿ ಯೋಜನೆ ಊರ್ಜಿತವಾಗುವುದು ಕಷ್ಟ. 2006ರ ನಂತರ ರಾಜ್ಯ ಸರ್ಕಾರಿ ಕೆಲಸಕ್ಕೆ ಸೇರಿದ ನೌಕರರು ತಮ್ಮ ಹಿರಿಯ ಸಹೋದ್ಯೋಗಿಗಳಿಗಿಂತ ಶೇ.10ರಷ್ಟು ಕಡಿಮೆ ವೇತನವನ್ನು ಈ ಕಠಾವಿನಿಂದಾಗಿ ಪಡೆಯುವ ಅವಕಾಶವಾಗಿದೆ.

(ಮುಂದುವರೆಯುವುದು…..)

No comments:

Post a Comment

ಅನುಕಂಪದ ಆಧಾರದ ಮೇಲೆ

ಸರ್ಕಾರಿ ಕಾರ್ನರ್‌ Friday, 31.08.2018, 3:00 AM       ವಿಜಯವಾಣಿ ಸುದ್ದಿಜಾಲ ದಿನದ ಪ್ರಶ್ನೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ನನ್ನ ತಂದೆ ಸೇವೆ...